Friday, October 30, 2009

ಇವತ್ತು ನಿಮ್ಮ ಭವಿಷ್ಯ ನೋಡಿದ್ರ!!!??


ನಿಮಗೆ ಬೆಳಿಗ್ಗೆ ನ್ಯೂಸ್ ಪೇಪರ್ ಓದೋ ಅಭ್ಯಾಸ ಇದೆಯೇನ್ರೀ??
ನಂಗೆ ಅಂತಹ ಒಳ್ಳೆ ಅಭ್ಯಾಸ ಇರ್ಲಿಲ್ಲ ಕಣ್ರೀ..
ಆದ್ರೆ ಮೊನ್ನೆ ಮೊನ್ನೆ ಕಾಂಕ್ರೀಟ್ ಗೋಡೆಗಳ ನಡುವಲ್ಲಿ ಈ ಬುದ್ದು ಗೆ ಜ್ಞಾನೋದಯ ವಾಯ್ತು...
ನಾನ್ ಏನ್ ಮಾಡ್ದೆ ಅಂದ್ರೆ ವಿಜಯ ಕರ್ನಾಟಕ, ಉದಯ ವಾಣಿ ಎರಡೂ ಪೇಪರ್ ಹಿಡ್ಕೊಂಡ್ ನಾನ್ ಭವಿಷ್ಯ compare ಮಾಡ್ದೆ..
ಅಹ ಏನ್ ಮಜಾ ಅಂತೀರಿ!!



ಒಂದರ
summary ಹೀಗಿತ್ತು..
"ಕಲ್ಯಾಣ ಕೂಡಿ ಬರಲಿದೆ..."
ದೂರ ಪ್ರಯಾಣ ಯೋಗ...
ಶತ್ರು ಭಾದೆ!!"

ಈಗ ಇನ್ನೊಂದರ summary ಕೇಳಿ..
"ಪತಿ ಪತ್ನಿ ಯಲ್ಲಿ ವಿರಸ!! (ಅಲ್ರೀ ಈಗಷ್ಟೇ ಮದ್ವೆ ಯಾಗಿ.. ಈಗಲೇ ಹೀಗೆ!! ಅಯ್ಯೋ ಶಿವನೆ!!)
ದೂರದ ಊರಿಗೆ ಎತ್ತಂಗಡಿ !!(ದೂರ ಪ್ರಯಾಣ ಯೋಗ !!).
ನೆಂಟರ ಆಗಮನ( ಕರೆಕ್ಟ್ ಆಗಿದೆ!! ಶತ್ರು ಭಾದೆ ಅಂದ್ರೆ ಇದೇ ಇರ್ಬೇಕು!!)"
ಹ್ಹ.. ಹ್ಹ.. ಹ್ಹ..!!

ವಾಹ್!! ಸೂಪರ್ಬ್.. ಅಲ್ರೀ!! ಬೆಳಿಗ್ಗೆ ಎದ್ದು ಇದಕ್ಕಿಂತ ಒಳ್ಳೆ ಜೋಕ್ ಓದೋಕೆ ಸಿಗುತ್ತಾ ನೀವೇ ಹೇಳಿ..
ಹ್ಹ.. ಹ್ಹ.. ಹ್ಹ..
ದಿನಾಲೂ ಈಗ ನಾನು ಇದನ್ನೇ ಮಾಡ್ತಾ ಇದ್ದೇನೆ!!
ಭವಿಷ್ಯ ಸುಳ್ಳೋ ಸತ್ಯಾನೋ ಸುಳ್ಳೋ ಅಂತ nange ಗೊತ್ತಿಲ್ಲಪ್ಪ..
ಆದ್ರೆ ಒಂದ್ ಮಾತ್ರ sure!!
ನನ್ನ ಈ comparision ನಂಗೆ ಫುಲ್ ಖುಷಿ ಕೊಡ್ತಿದೆ!!
ಬೇಕಿದ್ರೆ ನೀವೇ ಟ್ರೈ ಮಡಿ ನೋಡಿ ಸಾರ್!!

2 comments:

  1. >>"ವಿಜಯ ಕರ್ನಾಟಕ, ಉದಯ ವಾಣಿ ಎರಡೂ ಪೇಪರ್ ಹಿಡ್ಕೊಂಡ್ ನಾನ್ ಭವಿಷ್ಯ compare ಮಾಡ್ದೆ.."

    ಈಗ ವಿಜಯ ವಾಣಿ ಅಂತ ಇನ್ನೊಂದು ಪೇಪರ್ ಬರ್ತಾ ಇದೆ ಕಂಡ್ರಿ.. ಮೊಸ್ಟ್ಲಿ ವಿಜಯ ಕರ್ನಾಟಕ ಮತ್ತೆ ಉದ್ಯಯವಾಣಿ ಎರೆಡ್ರ ಸಮ್ಮರಿ ಅನ್ಸುತ್ತೆ... ನಿಮ್ಮ್ ಕೆಲ್ಸ ಈಜಿ ಆಗ್ ಬಹುದು. :-)

    ನಗುತರಿಸಿತು ಚೆನ್ನಾಗಿದೆ....

    ವಂದನೆಗಳೊಂದಿಗೆ.
    ಕಂಡಷ್ಟೂ ಖಗೋಳ

    ReplyDelete