Friday, October 30, 2009

ಮಂಗಾಟ ಶುರುವಾಯ್ತು ನೋಡಿ..


ನಮಸ್ಕಾರ..
ಯಾಕೋ ಇವತ್ತು ಒಳ್ಳೆ ಮೂಡಲ್ಲಿ ಇದ್ನೋ ಅಲ್ಲ ಖರಾಬ್ ಮೂಡ್ನಲ್ಲಿ ಇದ್ನೋ ಗೊತ್ತಿಲ್ಲ!!
ರೀತಿ ಒಂದು ಮಂಗಾಟ ಆಡಿಯೇ ಬಿಡೋಣ ಅಂತ dಸೈಡು ಮಾಡ್ಕೊಂಡು ಬಿಟ್ಟೆ!!
ಜಗತ್ತನ್ನ ಸೀರಿಯಸ್ ಆಗಿ ನೋಡೋವ್ರು ತುಂಬ ಅದ್ರ್ರು ಕಣ್ರೀ..
ಬನ್ನಿ.. ಇದೇ ಮೂರ್ ದಿನ ಇದ್ದ ಹೋಗೋ ಜಗತ್ತನ್ನೋ ಪ್ಲೇ ಗ್ರೌಂಡ್ ಅನ್ನ ಬೇರೆ angle ಅಲ್ಲಿ ನೋಡೋಕೆ ಕಲಿಯೋಣ!!
Atleast ಟ್ರೈ ಮಾಡೋಣ!! ಏನಂತೀರಿ!!
ನೋಡೋಣ.. ಎಷ್ಟ್ ದಿನ ಅಂತ ಮಂಗಾಟ ಅಡ್ತೇನೋ ನೋಡೇ ಬಿಡೋಣ...
ಮನಸ್ ಬಂದಾಗ ಮನಸ್ ಗೆ ಬಂದದ್ದನ್ನ ಗೀಚಿ ಇಲ್ಲಿ ಹಾಕ್ತೇನೆ..
ನಿಮ್ ಮೂಡ್ ಸರಿ ಇರೋವಗಲೋ.. ಹಾಳಾಗಿ ಕೆಟ್ ಕೆರ ಹಿಡ್ದ್ ಹೋಗಿರೋವಾಗ್ಲೋ..
ಯಾವಾಗ್ಲಾದ್ರೂ ಒಮ್ಮೆ...
ಮಂಗಾಟ ಕ್ಕೆ ಬನ್ನಿ..
ಓದಿ.. ನಗಿ..
ಕ್ಲೋಸ್ ಮಾಡಿ.. ಆರಾಮಾಗಿ ಹೋಗಿ..
ಅಷ್ಟೇರೀ.. ಮತ್ತೇನಿಲ್ಲ!!
ಹೊರಡ್ತೇನೆ .. ಹೊತ್ತಾಯ್ತು.!!

ಇವತ್ತು ನಿಮ್ಮ ಭವಿಷ್ಯ ನೋಡಿದ್ರ!!!??


ನಿಮಗೆ ಬೆಳಿಗ್ಗೆ ನ್ಯೂಸ್ ಪೇಪರ್ ಓದೋ ಅಭ್ಯಾಸ ಇದೆಯೇನ್ರೀ??
ನಂಗೆ ಅಂತಹ ಒಳ್ಳೆ ಅಭ್ಯಾಸ ಇರ್ಲಿಲ್ಲ ಕಣ್ರೀ..
ಆದ್ರೆ ಮೊನ್ನೆ ಮೊನ್ನೆ ಕಾಂಕ್ರೀಟ್ ಗೋಡೆಗಳ ನಡುವಲ್ಲಿ ಈ ಬುದ್ದು ಗೆ ಜ್ಞಾನೋದಯ ವಾಯ್ತು...
ನಾನ್ ಏನ್ ಮಾಡ್ದೆ ಅಂದ್ರೆ ವಿಜಯ ಕರ್ನಾಟಕ, ಉದಯ ವಾಣಿ ಎರಡೂ ಪೇಪರ್ ಹಿಡ್ಕೊಂಡ್ ನಾನ್ ಭವಿಷ್ಯ compare ಮಾಡ್ದೆ..
ಅಹ ಏನ್ ಮಜಾ ಅಂತೀರಿ!!



ಒಂದರ
summary ಹೀಗಿತ್ತು..
"ಕಲ್ಯಾಣ ಕೂಡಿ ಬರಲಿದೆ..."
ದೂರ ಪ್ರಯಾಣ ಯೋಗ...
ಶತ್ರು ಭಾದೆ!!"

ಈಗ ಇನ್ನೊಂದರ summary ಕೇಳಿ..
"ಪತಿ ಪತ್ನಿ ಯಲ್ಲಿ ವಿರಸ!! (ಅಲ್ರೀ ಈಗಷ್ಟೇ ಮದ್ವೆ ಯಾಗಿ.. ಈಗಲೇ ಹೀಗೆ!! ಅಯ್ಯೋ ಶಿವನೆ!!)
ದೂರದ ಊರಿಗೆ ಎತ್ತಂಗಡಿ !!(ದೂರ ಪ್ರಯಾಣ ಯೋಗ !!).
ನೆಂಟರ ಆಗಮನ( ಕರೆಕ್ಟ್ ಆಗಿದೆ!! ಶತ್ರು ಭಾದೆ ಅಂದ್ರೆ ಇದೇ ಇರ್ಬೇಕು!!)"
ಹ್ಹ.. ಹ್ಹ.. ಹ್ಹ..!!

ವಾಹ್!! ಸೂಪರ್ಬ್.. ಅಲ್ರೀ!! ಬೆಳಿಗ್ಗೆ ಎದ್ದು ಇದಕ್ಕಿಂತ ಒಳ್ಳೆ ಜೋಕ್ ಓದೋಕೆ ಸಿಗುತ್ತಾ ನೀವೇ ಹೇಳಿ..
ಹ್ಹ.. ಹ್ಹ.. ಹ್ಹ..
ದಿನಾಲೂ ಈಗ ನಾನು ಇದನ್ನೇ ಮಾಡ್ತಾ ಇದ್ದೇನೆ!!
ಭವಿಷ್ಯ ಸುಳ್ಳೋ ಸತ್ಯಾನೋ ಸುಳ್ಳೋ ಅಂತ nange ಗೊತ್ತಿಲ್ಲಪ್ಪ..
ಆದ್ರೆ ಒಂದ್ ಮಾತ್ರ sure!!
ನನ್ನ ಈ comparision ನಂಗೆ ಫುಲ್ ಖುಷಿ ಕೊಡ್ತಿದೆ!!
ಬೇಕಿದ್ರೆ ನೀವೇ ಟ್ರೈ ಮಡಿ ನೋಡಿ ಸಾರ್!!